ಪ್ರಶ್ನೆಯಾಗಿ ಉಳಿಯದಿರಲಿ! Posted by ಪ್ರಕಾಶ್ ಶ್ರೀನಿವಾಸ್ on July 11, 2014 Posted in: Uncategorized. Leave a comment ಉಸಿರಿಲ್ಲಿ ಉದುರುತ್ತಿದೆ,ಅಗಲಿಕೆಯ ಅಗ್ನಿಯಲ್ಲಿಬಿಸಿಯಾದ ಕಂಬನಿ ಒಡಲ ಸುಡುತ್ತಿದೆ!ಕರಗಿದ ಕನಸುಗಳ ಕಮಟು ವಾಸನೆ ಹಿಡಿದು ಬರುವೆಯಾ?ಹೆಪ್ಪುಗಟ್ಟಿದ ರಕ್ತದ ಕಣಗಳ ಅಪ್ಪುಗೆಯ ಶಾಖದಲ್ಲಿ ಕರಗಿಸುವೆಯಾ? ಸತ್ತ ಧ್ವನಿ ನಿನಗೆಲ್ಲಿ ಕೇಳಿಸುವುದು?ಅತ್ತುಬತ್ತಿದ ಕಣ್ಣುಗಳು ನಿನಗೇನು ಹೇಳುವುದು? ನಿಲ್ಲಿಸುವ ಮುನ್ನ ನನ್ನೀ ಹೃದಯದ ಬಡಿತಒಮ್ಮೆ ಆಲಿಸಿ, ಅಳಿಸಿ ಬಿಡುನಿನ್ನನ್ನು ಅಣುಅಣುವಾಗಿ ಪ್ರೀತಿಸಿದ ಗುರುತ! ಮರುಜನ್ಮದಲ್ಲಾದರೂನೋವಿನ ಕಲೆಗಳಿಲ್ಲದೆ ಹುಟ್ಟುತ್ತೇನೆ!-ಪ್ರಕಾಶ್ ಶ್ರೀನಿವಾಸ್ Share this:Click to share on Twitter (Opens in new window)Click to share on Facebook (Opens in new window) Related Posts navigation ← ನಾಲಕ್ಕು ಹನಿ! ಮೂರ್ ಹನಿ! →