ವಿಶ್ವದ ದುಡಿಮೆಯಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದ ಅಮೇರಿಕಾದ ಪಾಲಿಗೆ ಮೊದಲ ಮುಳ್ಳಾಗಿ ಬಂದಿದ್ದು, ಡಾಲರ್ ಕನಸಿಗೆ ಸಣ್ಣ ಎಚ್ಚರ ನೀಡಿದ ಸದ್ದೇ, ಸದ್ದಾಂ ಹುಸೇನ್. ಇನ್ಮುಂದೆ ನಾವು ಅಮೇರಿಕಾದ ಡಾಲರ್ ಗೆ ನಮ್ಮ ತೈಲವನ್ನು ಮಾರಾಟ ಮಾಡುವುದಿಲ್ಲ. ಅದರ ಬದಲಿಗೆ ಈರೋ (euro)ಗೆ ಮಾರುತ್ತೇವೆ. ಎಂದು ಘೋಷಿಸಿದರು ಸದ್ದಾಂ ಹುಸ್ಸೇನ್. ಅಮೇರಿಕಾದ ಹೂವಿನ ಹಾದಿಯಲ್ಲಿ ಮೊದಲ ಸಲ ಕಾಲಿಗೆ ಮುಳ್ಳು ಚುಚ್ಚಿದ ಅನುಭವವಾಯಿತು. ಈರೋ ಅಮೇರಿಕಾದ ಡಾಲರ್ ಗೆ ಸಮನಾಗಿ ಬೆಳೆಯುತ್ತಾ ಇರುವ ವೇಳೆ ಇಂತದೊಂದು ಡೀಲ್ ಅದಕ್ಕೆ ಸಿಕ್ಕರೆ ಮುಂದೆ ಈರೋ ಜಾಗತಿಕ ಹಣವಾಗಿ ಪರಿವರ್ತನೆಯಾಗುತ್ತೆ. ಜೊತೆಗೆ ಇಲ್ಲಿಯವರೆಗೂ ಇಡೀ ಜಗತ್ತು ನಮ್ಮನ್ನು ನಂಬಿತ್ತು. ನಾವೇ ಜಗತ್ತಿನ ಹಿರಿಯಣ್ಣ ಎಂದು ಬೀಗಿದೋ. ಇನ್ಮುಂದೆ ಅದೆಲ್ಲಾ ಮಣ್ಣು ಪಾಳಾಗುತ್ತಾ? ಎನ್ನುವ ಚಿಂತೆ ಅಮೇರಿಕಾಗೆ ಕಾಡತೊಡಗಿತು. ಹೇಗಾದರೂ ಮಾಡಿ ಸದ್ದು ಮಾಡಿರುವ ಸದ್ದಾಂ ಹುಸ್ಸೇನ್ ನ ಸದ್ದನ್ನು ಅಡಗಿಸಿಯೇ ತೀರಬೇಕು ಎಂದು ತಿರ್ಮಾನಿಸಿತು. ಏಕ್ದಂ ಸದ್ದಾಂ ಹುಸ್ಸೇನ್ ಮೇಲೆ ಎರಗಿದರೆ, ಉಳಿದ ರಾಷ್ಟ್ರಗಳು ಸುಮ್ನೆ ಇರ್ತವ? ಅವನ ವಸ್ತು ಅವನಿಗೆ ಇಷ್ಟ ಬಂದ ಹಾಗೆ ಮಾರಿಕೊಳ್ಳುತ್ತಾನೆ, ಅದನ್ನು ಕೇಳಕ್ಕೆ ನೀವು ಯಾರು ಎಂದು ಪ್ರಶ್ನಿಸುತ್ತವೆ. ಹಾಗಾಗಿ ಸದ್ದಾಂ ಹುಸ್ಸೇನ್ ನ ಸದ್ದು ಅಡಗಿಸಲೂ ಬೇಕು. ಜೊತೆಗೆ ಉಳಿದ ರಾಷ್ಟ್ರಗಳು ಪ್ರಶ್ನೆಯೂ ಮಾಡಬಾರದು ಅದಕ್ಕೊಂದು ಯೋಚನೆ ರೂಪಿಸಬೇಕು ಎಂದು ಯೋಚಿಸಿದಾಗಲೇ ಅವರ ಯೋಚನೆಯಲ್ಲಿ ಮೂಡಿದವನೇ ಒಸಮಾ ಬಿನ್ ಲಾಡನ್. ಮೊದಲು ಆಫ್ಗಾನಿಸ್ತಾನ್ ಮೇಲೆ ತಮ್ಮ ನಿಯಂತ್ರಣ ಸಾಧಿಸಬೇಕು ನಂತರ ಹಾಗೆ ಉಳಿದ ರಾಷ್ಟ್ರಗಳ ಮೇಲೂ ನಮ್ಮ ನೆರಳನ್ನು ವಿಸ್ತರಿಸಬಹುದು ಎನ್ನುವ ಕನಸಿನೊಂದಿಗೆ, ಆರಂಭಿಸಿದರು. ಯಾಕೆ ಆಫ್ಗಾನಿಸ್ತಾನ್ ಮೇಲೆಯೇ ಅವರ ಕಣ್ಣು ಬಿತ್ತು ಎಂದರೆ. ಆಫ್ಗಾನಿಸ್ತಾನ್ ಹೊರ ಜಗತ್ತಿಗೆ ಬೇಕಿದ್ದರೆ ಅದೊಂದು ಬಡತನ ತಾಂಡವ ಆಡುವ ದೇಶವಾಗಿರಬಹುದು ಆದರೆ ಅದು ತನ್ನೊಳಗೆ ಅಗಾಧವಾದ ನೇಸರ್ಗಿಕ ಸಂಪತ್ತನ್ನು ಅಡಗಿಸಿಕೊಂಡಿದೆ. ಒಂದು ಟ್ರಿಲಿಯನ್ ಡಾಲರ್ ನಷ್ಟು ಲೆತಿಯಂ, ಮಿನರಲ್ ಒಂದು ಟ್ರಿಲಿಯನ್ ಡಾಲರ್ ಅಂದ್ರೆ ಅದು ಸಾವಿರ ಬಿಲ್ಲಿಯನ್ ಡಾಲರ್ ಗೆ ಸಮ. ಊಹಿಸಿ ಅಷ್ಟೊಂದು ಸಂಪತ್ತನ್ನು ತನ್ನೊಳಗಿಟ್ಟುಕೊಂಡಿದೆ ಆಫ್ಗಾನಿಸ್ತಾನ್. ಹಾಗಾಗಿ ಅವರ ಕಣ್ಣು ಮೊದಲು ಸಹಜವಾಗಿಯೇ ಆಫ್ಗಾನಿಸ್ತಾನ್ ಮೇಲೆ ಬಿತ್ತು. ಇನ್ನೊಂದು ಕಾರಣ ಬಹುಶ ಇದು ಬಹುತೇಕರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು ಆದರೂ ಸತ್ಯ. ಮುಸ್ಲೀಮರ ಮೇಲೆ ಉಗ್ರರ ಪರದೆಯನ್ನು ಹಾಕೋದು, ಯಾಕೆ ಮುಸ್ಲಿಮರನ್ನು ಉಗ್ರರಾಗಿ ಬಿಂಬಿಸುವುದು ಎಂದರೆ ಜಗತ್ತಿಗೆ ಬೇಕಾದ ತೈಲ ಇರುವ ಬಾವಿಗಳು ಇರೋದೆಲ್ಲಾ ಮುಸ್ಲಿಂ ರಾಷ್ಟ್ರಗಳಲ್ಲಿ. ಮುಸ್ಲಿಮರೆಲ್ಲಾ ಉಗ್ರರು ಎಂದು ಒಂದು ಸೈಕಲಾಲಿಕಲ್ ಬಿಂಬವನ್ನು ಬಿಂಬಿಸಿದರೆ ನಾಳೆ, ಯಾವುದಾದರೂ ಮಿಡಿಲ್ ಈಸ್ಟ್ ರಾಷ್ಟ್ರದ ನಾಯಕ ತಮ್ಮ ವಿರುದ್ಧ ಧ್ವನಿ ಎತ್ತಿದರೆ ಅವರನ್ನು ಸುಲಭವಾಗಿ ಉಗ್ರರು ಎನ್ನುವ ಹೆಸರಿನಲ್ಲಿ ಬಗ್ಗುಬಡಿಯಬಹುದು ಎನ್ನುವ ಯೋಚನೆ. ಮೊದಲಿಗೆ 9/11 ಅಟ್ಯಾಕ್ ನಡೆಸುತ್ತಾರೆ, ಅದು ನಡೆದ ಕೆಲವೇ ದಿನಗಳಲ್ಲಿ ಅದಕ್ಕೆ ಕಾರಣ ಒಸಮಾ ಬಿನ್ ಲಾಡನ್ ಎನ್ನುತ್ತಾರೆ. ಇಲ್ಲೊಂದು ಗಮನಿಸಬೇಕಾದ ವಿಷಯ ಏನು ಅಂದ್ರೆ 9/11 ಅಟ್ಯಾಕ್ ಅಮೇರಿಕಾನೆ ಮಾಡಿದ್ದು ಎನ್ನುವ ಬಲವಾದ ಯಾವುದೇ ಸಾಕ್ಷಿಗಳು ಇಲ್ಲ. ಹಾಗೆ ಇಲ್ಲಿಯವರೆಗೂ ಅದನ್ನು ಮಾಡಿದ್ದು ಒಸಮಾನೆ ಎನ್ನುವುದಕ್ಕೂ ಸಹ ಸಾಕ್ಷಿಗಳು ಇಲ್ಲ.
ಅಟ್ಯಾಕ್ ನಡೆಯುವ ಕೆಲವೇ ವರ್ಷಗಳ ಹಿಂದಿನಿಂದ ಒಸಾಮಾನನ್ನು ಹುಡುಕಲು ಆರಂಭಿಸುವ ನಾಟಕ ಪ್ರಾರಂಭಿಸುತ್ತಾರೆ. ಜಗತ್ತಿನಲ್ಲಿಯೇ ಅತಿಹೆಚ್ಚು ಮಿಲ್ಟ್ರಿ. ಬೇಹುಗಾರಿಕೆಯನ್ನು ಹೊಂದಿರುವ ರಾಷ್ಟ್ರಕ್ಕೆ ಒಬ್ಬೆ ಒಬ್ಬ ಸಾಮಾನ್ಯ ಉಗ್ರನನ್ನು ಬಂಧಿಸಲು ಆಗುವುದಿಲ್ಲ. ಅದೇ ನೆಲದ CNN ಎನ್ನುವ ಸುದ್ದಿವಾಹಿನಿ. ಒಸಾಮ ಇರುವ ಜಾಗಕ್ಕೆ ಹೋಗುತ್ತಾರೆ. ಅವನೊಂದಿಗೆ ಸಂದರ್ಶನ ಮಾಡುತ್ತಾರೆ. ಅದೆಲ್ಲಾ ಹೇಗೆ ಸಾಧ್ಯ? ಆ ಚಾನಲ್ ನ ಬಜೆಟ್ ಎಷ್ಟು? ಅಮೇರಿಕಾದ ಮಿಲ್ಟ್ರಿ ಫೋರ್ಸ್ ಮುಂದೆ ಏನ್ ಅಂದರೆ ಏನೂ ಇಲ್ಲ. ಆದರು ಅವರು ಹೋಗುತ್ತಾರೆ ಮಾತಾಡುತ್ತಾರೆ, ಆರಾಮಾಗಿ ಬರುತ್ತಾರೆ ಇದೆಲ್ಲಾ ಹೇಗೆ. ಒಂದು ಅಮೇರಿಕ ಜನರನ್ನು ಫೂಲ್ ಮಾಡ್ತಾ ಇದೆ. ಇಲ್ಲ ಅವರಿಗೆ ನಿಜಕ್ಕೂ ಒಬ್ಬ ಉಗ್ರನನ್ನು ಹಿಡಿಯುವ ತಾಕತ್ತು ಇಲ್ಲ ಎಂದೇ ಅರ್ಥ. ಇದನ್ನು ನಾನು ಹೇಳುತ್ತಿರುವುದಲ್ಲ.
ಅಮೇರಿಕಾದ ಪತ್ರಕರ್ತ ಮಿಲ್ಟನ್ ವಿಲ್ಲಿಯಮ್ ಕೂಪರ್ ಹೇಳಿದ್ದು. ಬಹುಶ ಇಷ್ಟು ಮಾತ್ರವನ್ನೇ ಹೇಳಿದ್ದರೆ ಮಿಲ್ಟನ್ ವಿಲ್ಲಿಯಮ್ ಕೂಪರ್ ಈಗ ಜೀವಂತವಾಗಿರುತ್ತಿದ್ದರೆನೋ. ಅದರೊಂದಿಗೆ ಇನ್ನೊಂದು ಬಹುಮುಖ್ಯವಾದ ವಿಷಯವನ್ನು ಹೇಳುತ್ತಾರೆ. ಅದುವೇ ಈ ಜಗತನ್ನು ಬೆಚ್ಚಿ ಬೀಳಿಸಿದ್ದು. ಅವರು ಕಾರ್ಯನಿರ್ವಹಿಸುತ್ತಿದ್ದ ರೇಡಿಯೋವಾಹಿನಿಯಲ್ಲಿ. ಅದು ಯಾವಾಗ ಅಂದ್ರೆ 9/11 ಅಟ್ಯಾಕ್ ನಡೆಯುವ ಎರಡು ತಿಂಗಳ ಹಿಂದೆ! ನೋಡಿ ಅಮೇರಿಕ ಏನೋ plan ಮಾಡ್ತಾ ಇದೆ. ತನಗೆ ತಾನೇ ಏನೋ ಒಂದು ದೊಡ್ಡ ಅನಾಹುತ ಮಾಡಿಕೊಂಡು ಅದಕ್ಕೆ ಕಾರಣ ಒಸಮಾ ಬಿನ್ ಲಾಡನ್ ಎನ್ನುತ್ತಾರೆ. ಅಮೇರಿಕಾಗೆ ಈಗ ಜನರನ್ನು ಹೆದುರಿಸಲು ಒಬ್ಬ ಬೂಗಿಮ್ಯಾನ್ ಬೇಕು ಅಷ್ಟೇ. ಇಲ್ಲಿಯವರೆಗೂ ಎಲ್ಲಿಯೂ ಕೇಳದ ಲಾಡನ್ ಹೆಸರು ಈಗೀಗ ಹೆಚ್ಚಾಗಿ ಕೇಳುತ್ತಿದೆ ಎಂದರೆ ಏನರ್ಥ? ನೀವೇ ಯೋಚಿಸಿ ಎನ್ನುತ್ತಾರೆ. ಹೀಗೆ ಹೇಳಿದ ಮಿಲ್ಟನ್ ವಿಲ್ಲಿಯಮ್ ಕೂಪರ್ 9/11 ಅಟ್ಯಾಕ್ ನಡೆದ ಎರಡು ತಿಂಗಳ ನಂತರ ಮರ್ಮವಾಗಿ ಮರಣ ಹೊಂದುತ್ತಾರೆ. ಅಕ್ಷರದಲ್ಲಿ ಬರೆದಿಟ್ಟಿದ್ದರೂ, ಯಾರೋ ಈಗ ಬರೆದಿದ್ದಾರೆ ಎನ್ನಬಹುದಿತ್ತು. ಅವರು ಲೈವ್ ನಲ್ಲಿ ರೇಡಿಯೋ ಚಾನಲ್ ನಲ್ಲಿಯೇ ಮಾತಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರ ಲಿಂಕ್ ಇಲ್ಲಿದೆ ನೀವು ಒಮ್ಮೆ ಅವರ ಮಾತುಗಳನ್ನು ಕೇಳಿ. ಸಬ್ ಟೈಟಲ್ ಆನ್ ಮಾಡಿಕೊಂಡು ನೋಡಿ. (https://youtu.be/KMlE6aiDFfY)
9/11 ಅಟ್ಯಾಕ್ ನಡೆದ ಕೆಲವೇ ತಿಂಗಳಲ್ಲಿ, ಅದೊಂದು ಫೇಕ್ ಅಟ್ಯಾಕ್ ಅದನ್ನು ಖುದ್ದು ಅಮೇರಿಕಾನೆ ಮಾಡಿಕೊಂಡು ಅದನ್ನು ಒಸಾಮಾ ಮೇಲೆ ಹಾಕಿದರು. ಎಂದು ನಮ್ಮದೇ ಭಾರತದ ರಾಜೀವ್ ದಿಕ್ಷ್ಹಿತ್ ಮಾತಾಡಿದ್ದಾರೆ ನೋಡಿ. ಇದರಲ್ಲಿ ಆ ಕಟ್ಟಡದ ಒಳಗೆ ಮೊದಲೇ ಬಾಂಬ್ ಇಟ್ಟು, ಅದನ್ನು ಸಿಡಿಸಿ, ವಿಮಾನ ಬಂದು ಬಡಿದ ಕಾರಣ ಅದು ಹೊತ್ತಿಕೊಂಡು ಕುಸಿದು ಬಿತ್ತು ಎಂದು ಹೇಳಿದರು. ಎಂದು ದೃಶ್ಯಗಳನ್ನು ತೋರಿಸಿ ವಿವರಿಸುತ್ತಾರೆ. (https://youtu.be/EahbcZTXBek) ಹೀಗೆ ಮಾತಾಡಿದ ರಾಜೀವ್ ದಿಕ್ಷ್ಹಿತ್ ಸಹ. ಕೆಲವು ವರ್ಷಗಳ ನಂತರ ಮರ್ಮವಾಗಿ ಸಾವನ್ನಪ್ಪುತ್ತಾರೆ.
ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಹುಟ್ಟಬಹುದು. ಅಮೇರಿಕ ತನ್ನದೇ ಕಟ್ಟಡವನ್ನು ಅದು ಹೇಗೆ ತಾನೇ ಹೊಡೆದು ಹಾಕಿತು ಎಂದು. ಅದಕ್ಕೊಂದು ಕಾರಣವು ಸಿಗುತ್ತೆ ಅದು ಏನಂದರೆ, ಆ ಕಟ್ಟಡವನ್ನು ಕೆಲವು ಕಾರಣಗಳಿಂದ ಕೆಡವ ಬೇಕು ಎಂದು ಅಲ್ಲಿನ ಸ್ಥಳೀಯ ಕೆಲವು ಅತೋರಿಟಿಸ್ ಒತ್ತಾಯ ಮಾಡುತ್ತಿದ್ದರು. ಒಂದು ವೇಳೆ ಕೆಡವಿದರೆ ಅದರಿಂದ ಏಳುವ ದೂಳಿನಲ್ಲಿ asbestos ಇರುತ್ತದೆ ಅದು ಉಸಿರಾಟಕ್ಕೆ ಬಹಳ ಮಾರಕ. ಹಾಗಾಗಿ ಕ್ಲೀನ್ ಮಾಡಕ್ಕಾಗಿಯೇ ಅಮೇರಿಕಾಗೆ ಮಿಲ್ಲಿಯನ್ ಲೆಕ್ಕದಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಿರುವಾಗಲೇ ಒಂದೇ ಕಲ್ಲಿನಲ್ಲಿ ಎರಡು ಮಾವಿನ ಕಾಯಿ ಎನ್ನುವಂತೆ. ಅದನ್ನು ಕೆಡವಲು ಬೇಕು ಅದೇ ಕ್ಷಣ ಅದಕ್ಕೆ ಕಾರಣ ಉಗ್ರರು ಎಂದೂ ಬಿಂಬಿಸಬೇಕು ಎಂದು ಯೋಚಿಸುತ್ತಾರೆ. ಇಷ್ಟೆಲ್ಲಾ ವಿವಾದ ಇರುವ ಕಟ್ಟಡವನ್ನು ಯಾರಾದರೂ 99ವರ್ಷಕ್ಕೆ ಲೀಸ್ ಗೆ ತೆಗೆದುಕೊಳ್ಳುತ್ತಾರ? ತೆಗೆದುಕೊಂಡರು. ಅವರ ಹೆಸರು ಲ್ಯಾರಿ silvarstein.
ಅದು ಸಹ 9/11 ಅಟ್ಯಾಕ್ ಗೂ ಕೆಲವೇ ತಿಂಗಳ ಹಿಂದೆ. ಜೊತೆಗೆ ಆ ಕಟ್ಟಡಕ್ಕೆ ವಿಮೆ ಮಾಡಿಸುತ್ತಾರೆ, ಅದು ಸಹ ಇರುವುದರಲ್ಲೇ ಅತಿಹೆಚ್ಚು ಮೊತ್ತಕ್ಕೆ ವಿಮೆ. ಆ ಅಟ್ಯಾಕ್ ನಡೆದ ಮೇಲೆ ನಡೆದಿದ್ದು ಎರಡು ಬೇರೆ ಬೇರೆ ದಾಳಿ ಹಾಗಾಗಿ ನನಗೆ ಎರಡಕ್ಕೂ ಆದ ನಷ್ಟದ ಹಣವನ್ನು ಕೊಡಬೇಕು ಎಂದು ಕೇಳುತ್ತಾರೆ. ವಿಮೆ ಕಂಪನಿ ಅದಕ್ಕೆ ಒಪ್ಪಲ್ಲ. ನಡೆದಿದ್ದು ಒಂದೇ ಅಟ್ಯಾಕ್ ಎಂದು ವಾದಿಸುತ್ತೆ. ಕೊನೆಯೇ ಲ್ಯಾರಿ ಕೋರ್ಟ್ ಮೆಟ್ಟಿಲು ಹತ್ತಿ ಎರಡು ಅಟ್ಯಾಕ್ ನಡೆದಿದ್ದು ಎಂದು ವಾದಿಸಿ ಗೆಲ್ಲುತ್ತಾರೆ. ವಿಮೆ ಕಂಪನಿ ಇದ ಲ್ಯಾರಿಗೆ. 455 ಕೋಟಿ ಡಾಲರ್ ಲಾಭ ಗಳಿಸಿದ. ಇನ್ನೊಂದು ವಿಷಯ ಏನು ಅಂದರೆ. ಆತ ಅದೇ ಕಟ್ಟಡದಲ್ಲೇ ಕೆಲಸ ಮಾಡುವುದು. ಅಟ್ಯಾಕ್ ನಡೆದ ದಿನ ಮೈ ಹುಷಾರ್ ಇಲ್ಲವೆಂದು ಕೆಲಸಕ್ಕೆ ಬಂದಿರಲಿಲ್ಲ. (https://youtu.be/bFJz-SFtU0I) ಈ ಲಿಂಕ್ ನಲ್ಲೊಂದು ವೀಡಿಯೊ ಇದೆ ನೋಡಿ. ವಿಶ್ವ ವಾಣಿಜ್ಯ ಕೇಂದ್ರದ ದಾಳಿಯ ನಂತರ ನಡೆದ ಪತ್ರಿಕಾಗೋಷ್ಠಿ. ಅದರಲ್ಲಿ ಒಬ್ಬ ಯುವ ಪತ್ರಕರ್ತ. ಲ್ಯಾರಿ ಸಿಲ್ವೇರ್ಸ್ಟ್ನ ನ. ನಿಮಗೆ ಕಟ್ಟಡದೊಳಗೆ ಬಾಂಬ್ ಇತ್ತು. ಅನ್ನೋದು ಗೊತ್ತಿತ್ತಾ? ನಿಮ್ಮ ಮಗ ಮಗಳು. ಅಟ್ಯಾಕ್ ನಡೆದ ದಿನ ಆಫೀಸ್ ಗೆ ಬಂದಿರಲಿಲ್ಲಾ. ಎಂದು ಕೇಳಿದೊಡನೆ. ಅಲ್ಲಿದ್ದ ಲ್ಯಾರಿಯ ಸೆಕ್ಯೂರಿಟಿಗಳು ಅವರನ್ನು ಬಲವಂತವಾಗಿ ಹಿಡಿದು ಹೊರ ತಳ್ಳುತ್ತಾರೆ. ಹೋಗುವಾಗಲೂ ಸಹ. ಪತ್ರಕರ್ತರೇ. ದಯವಿಟ್ಟು ನಿಮ್ಮ ಪ್ರಶ್ನೆಗಳಲ್ಲಿ ಕೆಲವನ್ನು ಸೇರಿಸಿಕೊಳ್ಳಿ ಎಂದು ಆತ ಮನವಿ ಮಾಡಿಕೊಂಡೆ ಹೊರ ಹೋಗುತ್ತಾನೆ.
ಹೀಗೆ ಆರಂಭವಾದ ಅಮೇರಿಕಾದ ಅಶ್ವಮೇಧಿಕಪರ್ವ ಸದ್ದು ಮಾಡಿದ ಸದ್ದಾಂ ಹುಸ್ಸೇನ್ ನನ್ನು ೨೦೦೬ರಲ್ಲಿ ಕೊಲ್ಲುತ್ತೆ. ಅಟ್ಯಾಕ್ ಗೆ ಕಾರಣನಾದ ಒಸಾಮಾನನ್ನು ೨೦೧೧ರಲ್ಲಿ ಮುಗಿಸುತ್ತೇ. ಇದಾದ ಮೇಲೆ ಅಮೇರಿಕ ಸುಮ್ಮನಾಯಿತಾ? ಖಂಡಿತ ಇಲ್ಲ. ಲೇಟೆಸ್ಟ್ ಸಿರಿಯಾ ಅವರ ದುಷ್ಟತನಕ್ಕೆ ಬಲಿಯಾಗುತ್ತಿರುವ ದೇಶ. ಅದನ್ನು ಸಹ ಸಾಕ್ಷಿ ಸಹಿತ ಇನ್ನೊಮ್ಮೆ ವಿವರಿಸುವೆ.
ಕೊನೆಯದಾಗಿ ನಿಮ್ಮಲ್ಲಿ ಮೂರು ಪ್ರಶ್ನೆ ಕೇಳುವೆ. ನಿಮಗೆ ಗೊತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಉಗ್ರಗಾಮಿ ಯಾರು? ನಿಮ್ಮ ಉತ್ತರ : ಒಸಮಾ ಬಿನ್ ಲಾಡನ್ ಆಗಿದ್ದರೆ ಅದು ತಪ್ಪು.
ನಿಮಗೆ ಗೊತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಉಗ್ರಗಾಮಿಗಳ ದಾಳಿ ಯಾವುದು ನಿಮ್ಮ ಉತ್ತರ : ಅಮೇರಿಕಾದ ಟ್ವಿನ್ ಟವರ್ ಆಗಿದ್ದರೆ ಅದು ತಪ್ಪು.
ವಿಶ್ವದಲ್ಲಿ ಮೊದಲ ಮಾನವಸಹಿತ ರಾಕೆಟ್ ಅನ್ನು ಚಂದ್ರಗ್ರಹಕ್ಕೆ ಕಳುಹಿಸಿದ್ದು ಯಾರು? ಚಂದಿರನ ಮೇಲೆ ಮೊದಲ ಹೆಜ್ಜೆ ಇಟ್ಟ ವ್ಯಕ್ತಿಯ ಹೆಸರೇನು .
ನಿಮ್ಮ ಉತ್ತರ: ಮೊದಲೆಯದಕ್ಕೆ ಅಮೇರಿಕ. ಎರಡನೆಯದಕ್ಕೆ ನೀಲ್ ಅರ್ಮ್ ಸ್ಟ್ರಾಂಗ್. ಆಗಿದ್ದರೆ ಅದು ಅದು ಎರಡೂ ಸಹ ತಪ್ಪು.
ಜಗತ್ತಿನ ಬಲಿಷ್ಟವಾದ ಸುದ್ದಿ ಮಾಧ್ಯಮಗಳನ್ನು ತನ್ನ ಕೈಯಲ್ಲಿಟ್ಟುಕೊಂಡು. ತನಗೆ ಬೇಕಿರುವವರನ್ನು ಹೀರೋ, ಬೇಡದವರನ್ನು ವಿಲ್ಲನ್ ಮಾಡುತ್ತಾ. ತಾನೇ ಎಲ್ಲಕ್ಕೂ ಮೊದಲು ಎನ್ನುವ ಸುಳ್ಳನ್ನು ಹತ್ತಾರು ಬಾರಿ ಹೇಳಿ ನಿಜವಾಗಿಸುತ್ತಾ ಸಾಗುತ್ತಿದೆ ಅಮೇರಿಕ. ಇನ್ನೊಮ್ಮೆ ಅಮೇರಿಕ ಚಂದ್ರಗ್ರಹಕ್ಕೆ ಹೋಗಿದ್ದು. ನೀಲ್ ಅರ್ಮ್ ಸ್ಟ್ರಾಂಗ್ ಚಂದಿರನ ಮೇಲೆ ಕಾಲಿಟ್ಟಿದ್ದು, ಹೇಗೆ ಸುಳ್ಳು ಎನ್ನುವುದನ್ನು ಬರೆಯುವೆ. ಆಧಾರಗಳೊಂದಿಗೆ. ಅಷ್ಟರಲ್ಲಿ ನೀವೇ ಅದನ್ನು ಪರಿಶೀಲನೆ ಮಾಡಬೇಕು ಎಂದಿದ್ದರೂ ಮಾಡಿ. ಇದೆಲ್ಲಾ ಏನು ನಾನೇ ಹೋಗಿ ತನಿಖೆ ಮಾಡಿದ್ದಲ್ಲ. ಎಲ್ಲವೂ ಅಂತರ್ಜಾಲದಿಂದಲೇ ತೆಗೆದಿದ್ದು. ತಿಳಿಯುವ ಆಸಕ್ತಿ ತಾಳ್ಮೆ ಇದ್ದರೆ ಖಂಡಿತ ತಿಳಿಯಬಹುದು. ಒಂದು ವೇಳೆ ಮೇಲೆ ನಾನು ಕೊಟ್ಟ ಲಿಂಕ್. ಮತ್ತು ಹೇಳಿರುವ ವಿಷಯಗಳು ತಪ್ಪು ಎಂದು ನಿಮಗೆ ಅನ್ನಿಸಿದರೆ ಖಂಡಿತ ಸೂಕ್ತವಾದ ಆಧಾರದೊಂದಿಗೆ ಕಾಮೆಂಟ್ ಮಾಡಿ. ನಾನು ತಿಳಿಯುವೆ.